School Chalo 2012

ಉಳ್ಳಾಲದಲ್ಲಿ ಶಾಂತಿ ಕದಡುವ ಯತ್ನ: ಎಸ್‌ಡಿಪಿಐ ಖಂಡನೆ

Thursday, February 2nd, 2012
ಇತ್ತೀಚೆಗೆ ಜಿಲ್ಲೆಯ ಹಲವೆಡೆ ಅಹಿತಕರ ಘಟನೆಗಳು ನಡೆಯುತ್ತಿದ್ದರೂ ಉಳ್ಳಾಲದಲ್ಲಿ ಪರಿಸ್ಥಿತಿಯು ಶಾಂತವಾಗಿತ್ತು. ಆದರೆ ಇಲ್ಲಿನ ಶಾಂತಿಯನ್ನು ಕದಡುವ ನಿಟ್ಟಿನಲ್ಲಿ 31-01-2012ರಂದು ರಾತ್ರಿ ದುಷ್ಕರ್ಮಿಗಳು ಉಳ್ಳಾಲದಲ್ಲಿ ಮೂರು ಅಂಗಡಿಗಳನ್ನು ಬೆಂಕಿಗಾಹುತಿ ಮಾಡಿದ್ದು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಉಳ್ಳಾಲ ವಿಧಾನ ಸಭಾ ಸಮಿತಿ ಖಂಡಿಸುತ್ತದೆ.
ಹಿಂದೆಯೂ ಹಲವಾರು ಬಾರಿ ಇಂತಹ ಘಟನೆಗಳು ನಡೆದಿದ್ದರೂ ಪೊಲೀಸ್ ಇಲಾಖೆ ಈ ಬಗ್ಗೆ ಮೌನ ವಹಿಸಿದೆ. ಈಗಾಗಲೇ ಉಪ್ಪಿನಂಗಡಿ, ಸುಳ್ಯ ಹಾಗೂ ಜಿಲ್ಲೆಯ ಹಲವೆಡೆ ಕೋಮು ಸೌಹಾರ್ದಕ್ಕೆ ಧಕ್ಕೆ ತರಲು ಹಿಂದುತ್ವ ಸಂಘಟನೆಗಳು ಯತ್ನಿಸಿದ್ದು, ಉಳ್ಳಾಲದ ಘಟನೆಯೂ ಇದರ ಭಾಗವಾಗಿರಬಹುದೆಂಬ ಶಂಕೆಯುಂಟಾಗಿದೆ.
ಉಳ್ಳಾಲದಲ್ಲಿ ಶಾಂತಿ ಕದಡಲು ಪ್ರಯತ್ನಿಸಿದ ದುಷ್ಕರ್ಮಿಗಳನ್ನು ಬಂಧಿಸಿಕಾನೂನು ಕ್ರಮಕ್ಕೊಳಪಡಿಸಬೇಕೆಂದು ಎಸ್‌ಡಿಪಿಐ ಆಗ್ರಹಿಸುತ್ತದೆ.


Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India